ಸುರತ್ಕಲ್: ಅನಾರೋಗ್ಯದಿಂದ ಮೃತಪಟ್ಟಿದ್ದ ಯುವಕನ ವರದಿ ನೆಗೆಟಿವ್

Update: 2020-04-15 04:41 GMT

ಮಂಗಳೂರು, ಎ.15: ಸುರತ್ಕಲ್ ನಲ್ಲಿ ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಯುವಕನ ವೈದ್ಯಕೀಯ ವರದಿ ಕೋವಿಡ್ ನೆಗೆಟಿವ್ ಬಂದಿದೆ.

ಸುರತ್ಕಲ್ ಸಮೀಪದ ಇಡ್ಯದ 28 ವರ್ಷದ ಯುವಕ ‌ನಿನ್ನೆ ಮೃತಪಟ್ಟಿದ್ದು, ಈತನಿಗೆ ‌ಎರಡು ದಿನಗಳ ಹಿಂದೆ ಮಲಬದ್ಧತೆ ಮತ್ತು ಹೊಟ್ಟೆನೋವು ಕಾಣಿಸಿತ್ತು ಎನ್ನಲಾಗಿದೆ. ಮಂಗಳವಾರ ತೀವ್ರ ಹೊಟ್ಟೆನೋವು ‌ಕಾಣಿಸಿಕೊಂಡಿದ್ದರಿಂದ ಯುವಕನನ್ನು ನಗರದ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದ್ದು, ಆದರೆ ಆಸ್ಪತ್ರೆಗೆ ಸೇರುವ ಮುನ್ನವೇ ಯುವಕ ಮೃತಪಟ್ಟಿದ್ದ.

ಆದರೆ, ಎಲ್ಲೆಡೆ ಕೊರೋನ ವೈರಸ್ ಹರಡುತ್ತಿರುವ ಸಂದರ್ಭದಲ್ಲೇ ಯುವಕ ಮೃತಪಟ್ಟಿದ್ದರಿಂದ ಜಿಲ್ಲಾಡಳಿತದ ಸೂಚನೆಯಂತೆ ಖಾಸಗಿ ಆಸ್ಪತ್ರೆಯವರು ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಗಂಟಲಿನ ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಇಂದು ಯುವಕನ ವೈದ್ಯಕೀಯ ವರದಿ ಬಂದಿದ್ದು, ವರದಿಯಲ್ಲಿ ಕೋವಿಡ್ ನೆಗೆಟಿವ್ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News