ಕಾಪು: ಜೂಜಾಡುತ್ತಿದ್ದ ನಾಲ್ವರ ಬಂಧನ

Update: 2020-04-16 14:58 GMT

ಕಾಪು: ಕಾಪು ಠಾಣಾ ವ್ಯಾಪ್ತಿಯ ಕೋಟೆ ಗ್ರಾಮದ ಕಲ್ಲಾಪುವಿನಲ್ಲಿ ಜೂಜಾಟ ನಡೆಸುತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪರಾರಿಯಾಗಿದ್ದಾರೆ.

ಏಣ ಗುಡ್ಡೆಯ ರವಿ ಪೂಜಾರಿ, ಮಲ್ಲಾರಿನ ಪ್ರಸನ್ನ, ಪಳ್ಳಿಗುಡ್ಡೆಯ ಪುನಿತ್, ಕಲ್ಲಾಪು ಕಟಪಾಡಿಯ ವರುಣ್ ಎಂದು ಬಂಧಿತರು. ಪರಾರಿಯಾದವರನ್ನು ರೋಹಿತ್, ಪ್ರಭಾಕರ್ ಎಂದು ಗುರುತಿಸಲಾಗಿದೆ.

ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಾರ್ಚ್ 24ರಿಂದ  ಲಾಕ್ ಡೌನ್ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾನವ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸಹ ಗುಂಪು ಸೇರಿಕೊಂಡು ಮುಖಕ್ಕೆ ಯಾವುದೇ ರೀತಿಯ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಟ ಅಡುತ್ತಿದ್ದರು. ಬುಧವಾರ ಕಾಪು ಪೊಲೀಸರು ದಾಳಿ ನಡೆಸಿದ್ದಾರೆ. ಆಟಕ್ಕೆ ಬಳಸಲಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News