ಮೂಡುಬಿದಿರೆ ಶಾಸಕರಿಂದ ಲಾಕ್‌ಡೌನ್ ಉಲ್ಲಂಘನೆ: ಐವನ್ ಡಿಸೋಜ ಆರೋಪ

Update: 2020-04-16 18:02 GMT

ಮಂಗಳೂರು, ಎ.16: ಕೊರೋನ ಸೋಂಕು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರವು ಲಾಕ್‌ಡೌನ್ ಮೂಲಕ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೂ ಕೂಡ ಕಟ್ಟಡವೊಂದರ ಕಾಮಗಾರಿಗೆ ಬೇಕಾದ ಸರಕುಗಳನ್ನು ಸಾಗಿಸಲು ಅನುಮತಿ ನೀಡುವ ಮೂಲಕ ಮೂಡುಬಿದಿರೆ ಶಾಸಕ ಲಾಕ್‌ಡೌನ್ ಉಲ್ಲಂಘಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

 ರಾಜ್ಯ ಸರಕಾರದ ಆದೇಶವನ್ನು ಧಿಕ್ಕರಿಸಿ ಕ್ರಷರ್‌ನಿಂದ ಗಣಿಗಾರಿಕೆಗೆ ನಡೆಸಲು ಶಾಸಕರು ಅನುಮತಿ ನೀಡಿದ್ದಾರೆ. ಮೂಡುಬಿದಿರೆ ಶಾಸಕರಿಗೆ ನಗರದ ಕದ್ರಿ ಮಾರುಕಟ್ಟೆಯ ಕಾಮಗಾರಿ ನಿರ್ವಹಿಸಲು ಇರುವ ಆವಶ್ಯಕತೆ ಏನು? ಲಾಕ್‌ಡೌನ್ ಸಂದರ್ಭದಲ್ಲೂ ಶಾಸಕರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿರುವ ಐವನ್ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News