ಶಾಸಕನಿಂದ ಕಿರುಕುಳ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವೈದ್ಯ

Update: 2020-04-18 15:43 GMT

ಹೊಸದಿಲ್ಲಿ: ತನಗೆ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.

ಆಪ್ ಶಾಸಕ ಮತ್ತು ಸಹವರ್ತಿ ತನ್ನಿಂದ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದರು. ಆದರೆ ತಾನು ಹಣ ನೀಡಲು ನಿರಾಕರಿಸಿದಾಗ ತನ್ನ ಉದ್ಯಮವನ್ನು ಗುರಿಯಾಗಿಸಿದರು ಎಂದು ಆತ್ಮಹತ್ಯೆಗೆ ಶರಣಾದ 52 ವರ್ಷದ ದಿಲ್ಲಿಯ ವೈದ್ಯ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.

ದಿಲ್ಲಿಯ ನೇಬ್ ಸರಾಯಿ ನಿವಾಸಿಯಾಗಿರುವ ವೈದ್ಯ ರಾಜೇಂದ್ರ ಸಿಂಗ್ ಇಂದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಡೆತ್ ನೋಟ್ ನಲ್ಲಿ ಅವರು ಆಪ್ ಶಾಸಕ ಪ್ರಕಾಶ್ ಜಾರ್ವಲ್ ಮತ್ತು ಅವರ ಸಹವರ್ತಿ ಕಪಿಲ್ ವಿರುದ್ಧ ಆರೋಪ ಹೊರಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಬಗ್ಗೆ ಆಪ್ ಶಾಸಕ ಜಾರ್ವಲ್ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News