ಉಪ್ಪಿನಂಗಡಿ - ಮಡಂತ್ಯಾರ್ ರಸ್ತೆ ಮುಚ್ಚಲಾಗಿದೆ : ತಹಶೀಲ್ದಾರ್

Update: 2020-04-19 18:00 GMT

ಬೆಳ್ತಂಗಡಿ: ಕಲ್ಲೇರಿ ಜನತಾ ಕಾಲನಿ ಕೋವಿಡ್ -19 ಸೋಂಕಿತ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಕಲ್ಲೇರಿ ಜನತಾ ಕಾಲನಿಗೆ ಹಾಕಲಾಗಿದ್ದ ದಿಗ್ಭಂಧನ ತೆರವಾಗಿದ್ದು, ಇದೀಗ ಮತ್ತೆ ದಿಗ್ಭಂಧನ ವಿಧಿಸಿ ರವಿವಾರ ಸಂಜೆ ತಹಶೀಲ್ದಾರ್ ಆದೇಶಿಸಿದ್ದಾರೆ.

ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಇಲ್ಲಿ ಮತ್ತೆ ಸೀಲ್ ಡೌನ್ ಮಾಡಲಾಗಿದ್ದು, ಉಪ್ಪಿನಂಗಡಿ - ಮಡಂತ್ಯಾರ್ ರಸ್ತೆಯನ್ನು ಮುಚ್ಚಲಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News