ಹಳೆಯಂಗಡಿ: ಪಂಚಾಯತ್ ವಸತಿ ಕಟ್ಟಡಕ್ಕೆ ಬೆಂಕಿ ಆಕಸ್ಮಿಕ

Update: 2020-04-20 12:27 GMT

ಹಳೆಯಂಗಡಿ:  ಇಲ್ಲಿನ ಇಂದಿರಾನಗರದಲ್ಲಿ ಹಳೆಯಂಗಡಿ ಪಂಚಾಯತ್ ವಸತಿ ಕಟ್ಟಡವೊಂದಕ್ಕೆ ಆಕಸ್ಮಿಕ ಬೆಂಕಿ ತಗುಳಿದ ಘಟನೆ ವರದಿಯಾಗಿದೆ.

ಪಂಚಾಯತ್ ಸಿಬ್ಬಂದಿ ಹರೀಶ್ ಎಂಬುವವರು ವಾಸವಿದ್ದ ಕಟ್ಟಡಕ್ಕೆ ತಡರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಮನೆಯ ಮೇಲ್ಭಾಗದಿಂದ  ಶಬ್ದ ಕೇಳಿ  ಬರುತ್ತಿರುವುದನ್ನು ಮನಗಂಡ ಕಟ್ಟಡದ ನಿವಾಸಿ ಹರೀಶ್ ಅವರು ಎಚ್ಚರಗೊಂಡಾಗ, ಮನೆ ಭಾಗಶ ಹೊತ್ತಿ ಉರಿಯುತ್ತಿರುವುದು ಗಮನಕ್ಕೆ ಬಂತು. 

ತಕ್ಷಣ ಸಮಯಪ್ರಜ್ಙೆ ಮೆರೆದ ಹರೀಶ್ ರವರು ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗೆ ಬಂದು ಕೂಡಲೆ ನೆರೆಹೊರೆಯವರಿಗೆ ಮಾಹಿತಿ ತಿಳಿಸಿದ್ದು, ಸ್ಥಳೀಯ ಪೂಜಾ ಅರೇಂಜರ್ಸ್ ಸಂಸ್ಥೆಯ ಮಾಲಕ ಜಯಕೃಷ್ಣ ಕೋಟ್ಯಾನ್ ಟ್ಯಾಂಕರ್ ಮುಖಾಂತರ ನೀರು ಹಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದು, ನಂತರ ಮುಲ್ಕಿ ಪೊಲೀಸರು ಹಾಗು ಅಗ್ನಿ ಶಾಮಕದಳ ಆಗಮಿಸಿ  ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು.

ಹಳೆಯಂಗಡಿ ಪಂಚಾಯತ್ ಪಿ.ಡಿ.ಒ ಪೂರ್ಣಿಮಾ ಮತ್ತು ಗ್ರಾಮ ಲೆಕ್ಕಿಗ ಮೋಹನ್ ಪಂಚಾಯತ್ ಸಿಬ್ಬಂದಿಗಳು ಹಾಗು ಜನ ಪ್ರತಿನಿಧಿಗಳು  ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News