ಇಸ್ಪೀಟು ಜುಗಾರಿ: ಐವರ ಸೆರೆ
Update: 2020-04-21 21:37 IST
ಕಾರ್ಕಳ, ಎ.28: ಮಾಳ ಗ್ರಾಮದ ಹೆಕ್ಕರಬೆಟ್ಟು ಎಂಬಲ್ಲಿ ಎ.21ರಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮಧುಕರ ಶೆಟ್ಟಿ(56), ದಿನೇಶ್ ಆಚಾರ್ಯ(29), ಸುರೇಂದ್ರ ಪೂಜಾರಿ(36), ಕರುಣಾಕರ ಆಚಾರ್ಯ (32), ಪ್ರಸಾದ್ ಶೆಟ್ಟಿ(33) ಎಂಬವರನ್ನು ಪೊಲೀಸರು ಬಂಧಿಸಿ, 4830ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.