ಎಪಿಎಂಸಿ ನಿಯಮ ಮೀರಿ ಅಡಿಕೆ ಖರೀದಿಸಿದ ಆರೋಪ: ಕಡಬದಲ್ಲಿ 2 ವಾಹನ ವಶಕ್ಕೆ

Update: 2020-04-22 07:06 GMT

ಕಡಬ, ಎ.22. ಎಪಿಎಂಸಿ ನಿಯಮವನ್ನು ಮೀರಿ ಗೇರು ಬೀಜ ಖರೀದಿಸುವ ನೆಪದಲ್ಲಿ ಅಡಿಕೆಯನ್ನು ಖರೀದಿಸಿ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಎರಡು ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಬುಧವಾರ ಕಡಬದಲ್ಲಿ ನಡೆದಿದೆ.

ಕಡಬ ಬಸ್ ನಿಲ್ದಾಣದ ಬಳಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ವರ್ತಕರೋರ್ವರ ಗೋಡಾನ್ ನಿಂದ ಅಡಿಕೆ ಮತ್ತು ಗೇರು ಬೀಜವನ್ನು ತುಂಬಿಸಿದ್ದ ಎರಡು ಗೂಡ್ಸ್ ವಾಹನಗಳನ್ನು ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕೋವಿಡ್ ನಿಗ್ರಹ ದಳದ ಅಧಿಕಾರಿ ಮಸ್ತಾನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News