ಅನಂತಾಡಿ : ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ, ಕಿಟ್ ವಿತರಣೆ

Update: 2020-04-30 11:11 GMT

ವಿಟ್ಲ :  ಲಾಕ್ ಡಾನ್ ನಿಂದ ಅನಂತಾಡಿ ಗ್ರಾಮದಲ್ಲಿ ಕಷ್ಟದಲ್ಲಿ ಇರುವ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮತ್ತು ಆಶಾ ಕಾರ್ಯಕರ್ತರಿಗೆ ಗೌರವರ್ಪಣಾ ಕಾರ್ಯಕ್ರಮವು ಮಾಜಿ ಸಚಿವರಾದ  ಬಿ.ರಮನಾಥ ರೈ ಅವರ ಸಲಹೆಯಂತೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ  ಜಯಂತಿ ವಿ.ಪೂಜಾರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು.

ಜಯಂತಿ ವಿ. ಪೂಜಾರಿ ಅವರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸಿ ಗ್ರಾಮದ ಜನತೆಯ ಆರೋಗ್ಯಕ್ಕಾಗಿ ದುಡಿಯುತ್ತಿರುವ ಮೂವರು ಆಶಾ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ರಮನಾಥ ರೈ  ಹಣ್ಣು ಹಂಪಲು, ಸಾಲು, ಸ್ಯಾನಿಟರಿ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,  ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್, ಎ.ಪಿ.ಎಂ.ಸಿ ಅದ್ಯಕ್ಷ ಕೆ. ಪದ್ಮನಾಭ ರೈ, ಉಪಾದ್ಯಕ್ಷ ಚಂದ್ರಶೇಖರ ಪೂಜಾರಿ, ಜಿ.ಪಂ. ಸದಸ್ಯೆ  ಮಂಜುಳಾ ಮಾವೆ, ಹಿರಿಯ ಕಾಂಗ್ರೆಸ್ ಮುಖಂಡರಾದ ನಾರಾಯಣ ಸಾಲ್ಯಾನ್, ರಂಜನ್ ಪೂಂಜಾ , ಅನಂತಾಡಿ ವಲಯ ಕಾಂಗ್ರೆಸ್  ಅದ್ಯಕ್ಷ ಸತೀಶ್ ಪೂಜಾರಿ ಬಾಕಿಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News