ಅಳೇರಿಮಜಲು: ಅಕ್ರಮ ದಾಸ್ತಾನಿದ್ದ 40 ಲೋಡ್ ಮರಳು ವಶ

Update: 2020-05-02 08:58 GMT

ಕಡಬ, ಮೇ 2: ಅಕ್ರಮ ಮರಳು ದಾಸ್ತಾನು ಪತ್ತೆ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಅಧಿಕಾರಿಗಳು 40 ಲೋಡ್ ಮರಳು ವಶಪಡಿಸಿಕೊಂಡಿರುವ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದ ಅಳೇರಿಮಜಲು ಎಂಬಲ್ಲಿ ನಡೆದಿದೆ.

 ಬಂಟ್ರ ಗ್ರಾಮದ ಸಜಿ ಎಂಬವರಿಗೆ ಸೇರಿದ ಜಾಗದಲ್ಲಿ ಈ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಸುಧಾ ಹಾಗೂ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಸುಮಾರು 40 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿಯಲ್ಲಿ ಗ್ರಾಮ ಕರಣಿಕರಾದ ಹರೀಶ್ ಕುಮಾರ್, ಬಸವರಾಜ್, ಗ್ರಾಮ ಸಹಾಯಕರಾದ ಶಶಿಧರ್, ವಿನುತ್, ಉದಯಕುಮಾರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News