ರೆಡ್‌ಕ್ರಾಸ್ ಸೊಸೈಟಿಯಿಂದ ಕಿಯೋಸ್ಕ್ ಹಸ್ತಾಂತರ

Update: 2020-05-02 12:36 GMT

ಶಿರ್ವ, ಮೇ2: ಉಡುಪಿ ಜಿಲ್ಲಾ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಮಾದರಿ ಸಂಗ್ರಹಕ್ಕಾಗಿ ಕಿಯೋಸ್ಕ್ ಹಾಗೂ ಪಿಪಿಇ ಕಿಟ್‌ಗಳನ್ನು ಗುರುವಾರ ಹಸ್ತಾಂತರಿಸಲಾಯಿತು.

ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಬೈಲೂರು ಅವರಿಗೆ ಜಿಲ್ಲಾ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಹಾಗೂ ಐಆರ್ ಸಿಎಸ್‌ನ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಹಸ್ತಾಂತರಿಸಿದರು. ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಜನಜಾಗೃತಿಗಾಗಿ ಮಾಹಿತಿ ಕರಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ದಾನಿಗಳಾದ ಡಾ.ಕುಮಾರ್, ಸ್ಥಾಪಕ ಸದಸ್ಯ ಮಹಮ್ಮದ್ ವೌಲ, ಕೆ.ವಿವೇಕ ಆಚಾರ್ಯ ಶಿರ್ವ, ಆರೋಗ್ಯಕೇಂದ್ರದ ಅರವಳಿಕೆ ತಜ್ಞ ಡಾ.ಗಣಪತಿ, ವೈದ್ಯಾಧಿಕಾರಿಗಳಾದ ಡಾ.ಕೃಷ್ಣಮೂರ್ತಿ, ಡಾ.ಸೋನಾಲಿ, ಡಾ. ವಂದನಾ ಮೊಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News