ಕೋಳಿಅಂಕಕ್ಕೆ ದಾಳಿ: ಐವರ ಬಂಧನ

Update: 2020-05-03 15:22 GMT

ಕಾರ್ಕಳ, ಮೇ 3: ಇರ್ವತ್ತೂರು ಗ್ರಾಮದ ಕುಕ್ಕಿಬೆಟ್ಟು ರಸ್ತೆಯ ಹೊಸಮಾರು ಎಂಬಲ್ಲಿ ಮೇ 2ರಂದು ಸಂಜೆ ವೇಳೆ ಕೋಳಿ ಅಂಕ ನಡೆಸುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಶೆಟ್ಟಿ (68), ಆನಂದ ಶೆಟ್ಟಿ(48), ಗೋಪಾಲ ಭಂಡಾರಿ(40), ಪ್ರದೀಪ್ ಶೆಟ್ಟಿ(25), ನಾರಾಯಣ ಶೆಟ್ಟಿ(40) ಬಂಧಿತ ಆರೋಪಿಗಳು. ಇವರಿಂದ 2850ರೂ. ನಗದು, ನಾಲ್ಕು ಕೋಳಿಹುಂಜಗಳು, ಎರಡು ಬಾಳು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News