ಕುಪ್ಪೆಪದವು:ಗುಡ್ಡಕ್ಕೆ ಬೆಂಕಿ; ತಪ್ಪಿದ ಅನಾಹುತ

Update: 2020-05-04 16:28 GMT

ಕುಪ್ಪೆಪದವು, ಮೇ 4:ಎಡಪದವು-ಕುಪ್ಪೆಪದವು ರಸ್ತೆಯ ನೆಲ್ಲಿಜೋರ ಬಳಿಯ ಮಾಣಿಪಳ್ಳ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಸೋಮವಾರ ಸಂಜೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೀರಿನ ವಾಹನದೊಂದಿಗೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಯು ಸುಮಾರು ಒಂದು ತಾಸಿನಲ್ಲಿ ಬೆಂಕಿ ನಂದಿಸಿದರು.

ಗುಡ್ಡಕ್ಕೆ ಹತ್ತಿರದಲ್ಲಿ ವಸತಿ ಪ್ರದೇಶವಿದ್ದು, ಬೆಂಕಿಯಿಂದ ಈ ಮನೆಗಳಿಗೆ ಅಪಾಯ ಕಾದಿತ್ತು. ಸ್ಥಳೀಯರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News