ಕೈಗಾರಿಕೆಗಳ ಪ್ರಾರಂಭಕ್ಕೆ ಸ್ವಯಂ ದೃಢೀಕರಣ ಅಗತ್ಯ: ಉಡುಪಿ ಜಿಲ್ಲಾಧಿಕಾರಿ
Update: 2020-05-06 17:18 IST
ಉಡುಪಿ, ಮೇ 6: ಲಾಕ್ಡೌನ್ ಅವಧಿಯಲ್ಲಿ ಕೈಗಾರಿಕೆಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಗೆ ಬರುವ ಇತರ ಚಟುವಟಿಕೆ ಗಳು ಸ್ವಯಂ ದೃಢೀಕರಣ ಸಲ್ಲಿಸಿ ಕೈಗಾರಿಕೆ ಪ್ರಾರಂಭಿಸಲು ಸರಾರ ಸುತ್ತೋಲೆಯನ್ನು ಹೊರಡಿಸಿದೆ.
ಸರಕಾರಿ ಆದೇಶದಂತೆ, ಅರ್ಹರಿರುವ ಕೈಗಾರಿಕೆಗಳು ಐಟಿ/ಐಟಿಇಎಸ್ ಕಂಪೆನಿಗಳು, ಡಾಟಾ/ಕಾಲ್ ಸೆಂಟರ್ಗಳು, ಟೆಲಿ ಕಮ್ಯೂನಿಕೇಷನ್, ಇಂಟರ್ನೆಟ್ ಸರ್ವಿಸಸ್, ಇಂಕ್ಯೂಬರೇಟರ್ಗಳಲ್ಲದೆ ಇನ್ನಿತರ ಕಂಪೆನಿಗಳು ಕಾರ್ಯನಿರ್ವಸುವ ಬಗ್ಗೆ ಆನ್ಲೈನ್ನಲ್ಲಿ -www.kum.karnataka.gov.in- ವೆಬ್ಸೈಟ್ನಲ್ಲಿ ಕೋವಿಡ್-19 ಸೆಲ್ಫ್ ಡಿಕ್ಲರೇಷನ್ ಲಿಂಕ್ನ್ನು ಉಪಯೋಗಿಸಿ ಕೊಂಡು ಸ್ವಯಂ ದೃಢೀಕರಣ ಸಲ್ಲಿಸಿದ ನಂತರ ಘಟಕ ಪ್ರಾರಂಭಿಸಬಹುದಾಗಿ ದೆ. ಈಗಾಗಲೇ ಪ್ರಾರಂಭಿಸಿರುವ ಘಟಕಗಳು ಸಹ ಈ ಲಿಂಕ್ ಮೂಲಕ ದೃಢೀಕೃರಣ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.