×
Ad

ದ.ಕ. ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ಬಿಡುಗಡೆ

Update: 2020-05-07 18:04 IST

ಮಂಗಳೂರು, ಮೇ 7: ಕೊರೋನ ಲಾಕ್‌ಡೌನ್ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಠಕ್ಕೀಡಾಗಿರುವ ಗೋಶಾಲೆಗಳಿಗೆ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ಮಂಜೂರು ಮಾಡಲು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿರುತ್ತಾರೆ.

ಕನ್ಯಾನದ ಶ್ರೀ ವಿಶ್ವೇಶತೀರ್ಥ ಗೋ ಸಂರಕ್ಷಣಾ ಕೇಂದ್ರಕ್ಕೆ 2 ಲಕ್ಷ ರೂ., ಪಜೀರಿನ ಗೋವನಿತಾಶ್ರಯ ಟ್ರಸ್ಟ್ಗೆ 5 ಲಕ್ಷ ರೂ., ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕ್ಷೇತ್ರಕ್ಕೆ 1 ಲಕ್ಷ ರೂ., ಕೊಕ್ಕಡದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ)ಯ ಕಾಮಧೇನು ಕೇಂದ್ರಕ್ಕೆ 2 ಲಕ್ಷ ರೂ., ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಂದಿನಿ ಗೋಶಾಲೆಗೆ 2 ಲಕ್ಷ ರೂ., ಕರೋಪಾಡಿಯ ಗುರುದೇವ ಚಾರಿಟೆಬಲ್ ಕಮಿಟಿಗೆ 2 ಲಕ್ಷ ರೂ., ಕೋಟೆಕಾರಿನ ಶ್ರೀ ಪರಾಶಕ್ತಿ ಟ್ರಸ್ಟ್ನ ಪರಾಶಕ್ತಿ ದೇಗುಲ ಸಮುಚ್ಛಯಕ್ಕೆ 2 ಲಕ್ಷ ರೂ, ಗಂಡಿಬಾಗಿಲಿನ ಸಿಯಾನ್ ಆಶ್ರಮ್ಗೆ 1 ಲಕ್ಷ ರೂ., ಶ್ರೀರಾಮ್ ಗೋಶಾಲೆಗೆ 2 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯ್ತುಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News