ಪಾಂಡೇಶ್ವರ ನಿವಾಸಿ ಅನೂಪ್ ಝೇವಿಯರ್ ಡಿಸೋಜ ಕುವೈತ್ ನಲ್ಲಿ ನಿಧನ

Update: 2020-05-10 04:18 GMT

ಕುವೈತ್: ಸುಮಾರು 25 ವರ್ಷಗಳಿಂದ ಕುವೈತಿನಲ್ಲಿ ದುಡಿಯುತ್ತಿದ್ದ ಮಂಗಳೂರಿನ ಪಾಂಡೇಶ್ವರ ರೋಸಾರಿಯೋ ನಿವಾಸಿ ಅನೂಪ್ ಝೇವಿಯರ್ ಡಿಸೋಜ (51) ಎಂಬವರು ಇತ್ತೀಚಿಗೆ ಕುವೈತ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅವರ ಪಾರ್ಥೀವ ಶರೀರವು ಇಂದು (ಮೇ.10) ಮದ್ಯಾಹ್ನ 3:30ಕ್ಕೆ ಕತಾರ್ ಏರ್ ವೇಸಿನಲ್ಲಿ ಊರಿಗೆ ತರಲಾಗುತ್ತದೆ. ಈ ಪ್ರಕ್ರಿಯೆಗೆ ಬೇಕಾದ ಎಲ್ಲಾ ಕಾಗದ ಪತ್ರಗಳ ಉಸ್ತುವಾರಿಯನ್ನು ಕುವೈತಿನ ಸಾಮಾಜಿಕ ಹಾಗೂ ಸಾಮುದಾಯಿಕ ಸಂಘಟನೆಯಾದ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆ.ಕೆ.ಎಂ.ಏ) ಇದರ ಮಾನವೀಯ ಸೇವಾ ಘಟಕವಾದ ಮ್ಯಾಗ್ನೆಟ್ ತಂಡದ ಸದಸ್ಯರುಗಳು ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News