ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Update: 2020-05-14 17:51 GMT

 ಮೂಡುಬಿದಿರೆ : ತಾಲೂಕಿನ ತೋಡಾರು ನಿವಾಸಿಯಾಗಿರುವ ಕಾರ್ಮಿಕನೋರ್ವ ಮಂಗಳೂರಿನ ಅಡ್ಯಾರಿನಲ್ಲಿ ನಿರ್ಮಾಣ ಹಂತದ 5ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ತೋಡಾರು ಪಡೀಲ್ ಬಾಕಿಮಾರು ನಿವಾಸಿ ವಿನಯ್ ಪೂಜಾರಿ (32) ಮೃತಪಟ್ಟ ಯುವಕ. ಈತ ಅಡ್ಯಾರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮಹಡಿಯಿಂದ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News