ಸುರತ್ಕಲ್: ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಣೆ

Update: 2020-05-15 16:52 GMT

ಸುರತ್ಕಲ್, ಮೇ 15: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಮೂರನೇ ಹಂತದ ಕಿಟ್ ವಿತರಣೆಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಗರ ಪ್ರದೇಶದಲ್ಲಿ ಎರಡು ಬಾರಿ ಪಡಿತರ ಕಿಟ್ ವಿತರಣೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 45 ಸಾವಿರ ಪಡಿತರ ಕಿಟ್ ವಿತರಣೆ ಮಾಡಲಾಗಿದೆ.ಬಿಜೆಪಿ ಮುಖಂಡರು,ಕಾರ್ಪೊರೇಟರ್‌ಗಳು, ಕಾರ್ಯಕರ್ತರ ನೆರವಿನಲ್ಲಿ ವಿವಿಧ ಹಂತದಲ್ಲಿ ನೆರವು ಒದಗಿಸಲಾಗಿದೆ. ಇದೀಗ ಕ್ಷೇತ್ರದ ಎಲ್ಲೆಡೆ ಇರುವ ಅರ್ಹರಿಗೆ ಒಟ್ಟು 6 ಸಾವಿರ ಕಿಟ್ ಕಳಿಸಿಕೊಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತರ ಮಂಡಲದ ಅಧ್ಯಕ್ಷ ತಿಲಕ್‌ರಾಜ ಕೃಷ್ಣಾಪುರ, ಕಾರ್ಯದರ್ಶಿ ಪೂಜಾ ಪೈ, ರಾಜೇಶ್ ಕೊಠಾರಿ, ಸಂದೀಪ್ ಪಚ್ಚನಾಡಿ, ಬಿಜೆಪಿಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಸುಮಂಗಳಾ, ಜಯಾನಂದ ಅಂಚನ್, ಲೋಹಿತ್ ಅಮೀನ್, ಶ್ವೇತ ಪೂಜಾರಿ, ಲಕ್ಷ್ಮಿಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ, ಸಂದೀಪ್ ಪಚ್ಚನಾಡಿ, ದಿನಕರ್ ಇಡ್ಯಾ, ವಿಠಲ ಸಾಲಿಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News