×
Ad

​ಕಾಸರಗೋಡು : ಕಾಂಗ್ರೆಸ್ ಹಿರಿಯ ನಾಯಕ ಗಂಗಾಧರನ್ ನಾಯರ್ ನಿಧನ

Update: 2020-05-15 23:03 IST

ಕಾಸರಗೋಡು : ಕಾಂಗ್ರೆಸ್ ಹಿರಿಯ ನಾಯಕ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ. ಗಂಗಾಧರನ್ ನಾಯರ್ (78) ಶುಕ್ರವಾರ ರಾತ್ರಿ  ನಿಧನರಾದರು.

ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ, ಯುಡಿಎಫ್ ಜಿಲ್ಲಾ ಸಂಚಾಲಕ,  ಕೃಷಿ ಅಭಿವೃದ್ಧಿ ಬ್ಯಾಂಕ್, ಪೆರಿಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅವರು ಪತ್ನಿ,  ಮೂವರು ಮಕ್ಕಳು ಸೇರಿದಂತೆ ಅಪಾರ  ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ  ಹುಟ್ಟೂರಾದ ಪೆರಿಯ ದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News