ಈಶ್ವರಮಂಗಲ : ಎಸ್ಸೆಸ್ಸೆಫ್ ವತಿಯಿಂದ ಈದ್ ಕಿಟ್ ವಿತರಣೆ

Update: 2020-05-16 14:14 GMT

ಈಶ್ವರಮಂಗಲ : ಎಸ್ಸೆಸ್ಸೆಫ್  ಮೇನಾಲ ಶಾಖೆ ಇದರ ವತಿಯಿಂದ ಶಾಖೆಯ ವ್ಯಾಪ್ತಿಯಲ್ಲಿರುವ ಅರ್ಹ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.

ಬಡಜನರ, ನಿರ್ಗತಿಕರ ಏಳಿಗೆಗಾಗಿ ವಿವಿಧ ರೀತಿಯ ಸಾಂತ್ವನ ಸೇವೆಯಲ್ಲಿರುವ ಎಸ್ಸೆಸ್ಸೆಫ್  ಮೇನಾಲ ಶಾಖೆ  ಸಾಂತ್ವನ ಸೇವೆಯಡಿಯಲ್ಲಿ  ಬಡ ಯುವತಿಯರ ವಿವಾಹ,   ಮನೆ ನಿರ್ಮಾಣ, ಉಚಿತ ವಿದ್ಯುತ್ ಸೌಲಭ್ಯ,  ಆಸ್ಪತ್ರೆಗಳಿಗೆ ಭೇಟಿ ನೀಡಿ ಬಡ ರೋಗಿಗಳ ಆರೋಗ್ಯ ವಿಚಾರಿಸಿ ಅವರಿಗೆ ಬೇಕಾದ ಉಚಿತ ಔಷಧಿ ಸಹಿತ ಇನ್ನಿತರ ಚಿಕಿತ್ಸಾ ಸಹಾಯ ಮಾಡುತ್ತಿರುವುದಲ್ಲದೆ, ಸಾಂದರ್ಭಿಕ ತುರ್ತು ಸೇವೆಗಳೊಂದಿಗೆ ಹಲವಾರು ರೀತಿಯ ಸಾಂತ್ವನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷವೂ ಇಫ್ತಾರ್ ಸಂಗಮ,   ರಂಝಾನ್ ಕಿಟ್  ಹಾಗೂ  ಈದ್ ಕಿಟ್ ವಿತರಿಸುತ್ತಾ ಬರುತ್ತಿದೆ. ಈ ವರ್ಷವೂ  ಅರ್ಹ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಗಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ‌ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಹಾಗೂ ಕೆ.ಸಿ.ಎಫ್ ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News