ಮೂಡುಬಿದಿರೆ : ದರೋಡೆ ಪ್ರಕರಣದ ಆರೋಪಿಗಳು ಸೆರೆ

Update: 2020-05-16 17:25 GMT

ಮೂಡುಬಿದಿರೆ : ಎರಡು ತಿಂಗಳ ಹಿಂದೆ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ಲಿನ ಮಿರಾಂದ ಕಂಪೌಂಡಿನಲ್ಲಿದ್ದ ವೃದ್ಧ ದಂಪತಿಯ ಮನೆಗೆ ನುಗ್ಗಿ ನಗ-ನಗದು ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲಬೆಟ್ಟುವಿನ ಹೈದರ್ (50), ಮೂಡುಬಿದಿರೆಯ ಸಂತೋಷ್ (38), ಮಂಗಳೂರು ಶಕ್ತಿನಗರದ ಸ್ಟೀವನ್ (38) ಹಾಗೂ ಪುತ್ತೂರು ಸಂಪ್ಯಾದ ಉಮೇಶ್ ಬಂಧಿತ ಆರೋಪಿಗಳು.

 ಆರೋಪಿಗಳು ಎಸ್.ಜೆ ಮಿರಾಂಡ ದಂಪತಿ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ಧ ದಂಪತಿಗೆ ಚಾಕು ತೋರಿಸಿ ಕಪಾಟಿನಲ್ಲಿದ್ದ 80 ಗಾಂ ಚಿನ್ನ ಹಾಗೂ 5,000 ನಗದು ದೋಚಿ ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News