ಕಟಪಾಡಿ: ಸಿಡಿಲು ಬಡಿದು ಯುವಕ ಮೃತ್ಯು

Update: 2020-05-17 17:38 GMT

ಕಟಪಾಡಿ: ಇಲ್ಲಿನ ಪಡು ಏಣಗುಡ್ಡೆ ಜೆ.ಎನ್.ನಗರದಲ್ಲಿ ಯುವಕನೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.

ಸುರೇಶ್ ಕುರ್ಕೇರಾ ಎಂಬವರ ಪುತ್ರ ಭರತ್ (20) ಮೃತ ಯುವಕ ಎಂದು ಗುರುತಿಸಲಾಗಿದೆ.

ಮನೆಯೊಳಗಿರುವಾಗ ಸಿಡಿಲು ಬಡಿತದಿಂದ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಭರತ್ ಇಲ್ಲಿನ ವಿಶ್ವನಾಥ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಯೋಜನೆಯಲ್ಲಿ ಭಾಗಿಯಾಗಿದ್ದು, ಅಂಬಾಡಿ ಚಂಡೆ ಬಳಗದ ಸದಸ್ಯರಾಗಿದ್ದರು.

ಮೃತರ ತಂದೆ ಸೆಂಟ್ರಿಂಗ್ ಕಾರ್ಮಿಕರಾಗಿದ್ದಾರೆ. ಕಾಪು ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News