ಶಿರ್ವ: ಅಕ್ರಮ ಕಸಾಯಿಖಾನೆಗೆ ದಾಳಿ

Update: 2020-05-18 16:21 GMT

ಶಿರ್ವ, ಮೇ 18: ಕಳತ್ತೂರು ಗ್ರಾಮದ ಚಂದ್ರನಗರ ದೇವರಪಾಡಿ ಎಂಬಲ್ಲಿ ಮೇ 17ರಂದು ಮಧ್ಯಾಹ್ನ ವೇಳೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಶಿರ್ವ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಆರೋಪಿಗಳಾದ ಆಲ್ತಾಫ್ ಚಂದ್ರನಗರ, ಯಾಸಿದ್ ಚಂದ್ರ ನಗರ, ಆರೀಸ್, ಫಾರೂಕ್ ಚಂದ್ರನಗರ ಎಂಬವರು ಪರಾರಿಯಾಗಿ ದ್ದಾರೆ. ಸ್ಥಳದಲ್ಲಿದ್ದ 55-60 ಕೆ.ಜಿ. ದನದ ಮಾಂಸ , ದನ ಕಡಿಯಲು ಉಪಯೋಗಿಸಿದ ಸೊತ್ತುಗಳನ್ನು, ಒಂದು ಗಂಡು ಹೋರಿ, 3 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News