ಉಡುಪಿ: ಬುಧವಾರ 420 ಸ್ಯಾಂಪಲ್ಗಳು ಪರೀಕ್ಷೆಗೆ ರವಾನೆ
ಉಡುಪಿ, ಮೇ 20: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಬುಧವಾರ 104 ವರದಿಗಳು ನೆಗೆಟಿವ್ ಫಲಿತಾಂಶ ನೀಡಿದರೆ, ಮಹಾರಾಷ್ಟ್ರದ ಮುಂಬೈಯಿಂದ ಬಂದ ಆರು ಮಂದಿಯ ವರದಿ ಪಾಸಿಟಿವ್ ಫಲಿತಾಂಶವನ್ನು ನೀಡಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬುಧವಾರವೂ ಕೊರೋನ ಸೋಂಕು ವ್ಯಾಪಕವಾಗಿರುವ ಹೊರರಾಜ್ಯಗಳಿಂದ ಆಗಮಿಸಿದ 354 ಮಂದಿ ಸೇರಿದಂತೆ ಒಟ್ಟು 420 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಿಂದ ಒಟ್ಟು 987 ಸ್ಯಾಂಪಲ್ ಗಳ ಪರೀಕ್ಷಾ ವರದಿ ಬರಲು ಬಾಕಿ ಇವೆ ಎಂದು ಅವರು ತಿಳಿಸಿದರು.
ಇಂದು ಮುಂಬೈಯಿಂದ ಬಂದ ಕುಂದಾಪುರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ತಲಾ ಇಬ್ಬರ ಮಾದರಿಗಳು ಪಾಸಿಟಿವ್ ಆಗಿವೆ. ಇವುಗಳಲ್ಲಿ ನಾಲ್ಕು ಹಾಗೂ 15 ವರ್ಷ ಪ್ರಾಯದ ಬಾಲಕಿಯರ ಸ್ಯಾಂಪಲ್ಗಳೂ ಸೇರಿವೆ. ಹೀಗಾಗಿ ಒಟ್ಟು ೋಂಕಿತರ ಸಂಖ್ಯೆ ಈಗ 21ಕ್ಕೇರಿದೆ.
ಇಂದು ಮುಂಬೈಯಿಂದ ಬಂದ ಕುಂದಾಪುರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ತಲಾ ಇಬ್ಬರ ಮಾದರಿಗಳು ಪಾಸಿಟಿವ್ ಆಗಿವೆ. ಇವುಗಳಲ್ಲಿ ನಾಲ್ಕು ಹಾಗೂ 15 ವರ್ಷ ಪ್ರಾಯದ ಬಾಲಕಿಯರ ಸ್ಯಾಂಪಲ್ಗಳೂ ಸೇರಿವೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ ಈಗ 21ಕ್ಕೇರಿದೆ. ಇಂದು ಕೊರೋನ ರೋಗದ ಗುಣಲಕ್ಷಣವಿರುವ 420 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 50 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, ಮೂವರು ತೀವ್ರ ಉಸಿರಾಟ ತೊಂದರೆಯವರು, 13 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 354 ಮಂದಿ ಕೊರೋನ ಹಾಟ್ಸ್ಪಾಟ್ಗಳಿಂದ ಬಂದವರ ಸ್ಯಾಂಪಲ್ಗಳು ಸೇರಿವೆ ಎಂದು ಡಾ. ಸೂಡ ವಿವರಿಸಿದರು.
ಇಂದು ಕೊರೋನ ರೋಗದ ಗುಣಲಕ್ಷಣವಿರುವ 420 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 50 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, ಮೂವರು ತೀವ್ರ ಉಸಿರಾಟ ತೊಂದರೆಯವರು, 13 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 354 ಮಂದಿ ಕೊರೋನ ಹಾಟ್ಸ್ಪಾಟ್ಗಳಿಂದ ಬಂದವರ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಸಂಜೆಯವರೆಗೆ ಒಟ್ಟು 3112 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 2103 ನೆಗೆಟಿವ್ ಆಗಿವೆ. ಒಟ್ಟಾರೆಯಾಗಿ ಈವರೆಗೆ ಉಡುಪಿಯ 22 ವರದಿಗಳು ಪಾಸಿಟಿವ್ ಆಗಿ ಬಂದಿವೆ ಎಂದರು.
ಇಂದು ಸಹ ಸ್ಯಾಂಪಲ್ಗಳನ್ನು ಮಂಗಳೂರು ಹಾಗೂ ಮಣಿಪಾಲದಲ್ಲಿ ಹೊಸದಾಗಿ ಪ್ರಾರಂಭಗೊಂಡ ಕೋವಿಡ್ ಪ್ರಯೋಗಾಲಯಕ್ಕೆ ಕಳು ಹಿಸಲಾಗಿದೆ ಎಂದು ಡಿಎಚ್ಓ ನುಡಿದರು.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 20 ಮಂದಿ ಆಎಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 14 ಮಂದಿ ಪುರುಷ ಹಾಗೂ ಆರು ಮಂದಿ ಮಹಿಳೆಯರಿದ್ದಾರೆ. ನಾಲ್ವರು ಕೊರೋನ ಶಂಕಿತರು, ಒಂಭತ್ತು ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ಏಳು ಮಂದಿ ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 13 ಮಂದಿ ಬಿಡುಗಡೆಗೊಂಡಿದ್ದು, 94 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಹಿನ್ನೆಲೆಯೊಂದಿಗೆ ಬುಧವಾರ 33 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4699 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3357(ಇಂದು 31) ಮಂದಿ 28 ದಿನಗಳ ನಿಗಾವನ್ನೂ, 4184 (85) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 366 ಮಂದಿ ಹೋಮ್ ಕ್ವಾರಂಟೈನ್ ಹಾಗೂ 55 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ.ಸುಧೀರ್ಚಂದ್ರ ಸೂಡ ನುಡಿದರು.