ಯೆ‌ನೆಪೋಯ ಹೋಮಿಯೋಪತಿ ಆಸ್ಪತ್ರೆಯಿಂದ ರೋಗ ನಿರೋಧಕ ಔಷಧಿ ವಿತರಣೆ

Update: 2020-05-20 16:38 GMT

ಕೊಣಾಜೆ : ಯೆನೆಪೋಯ ಹೋಮಿಯೋಪತಿ ಆಸ್ಪತ್ರೆ ಮತ್ತು ಗ್ರಾಮ ಪಂ. ನರಿಂಗಾನ ಹಾಗೂ ಆಶಾಕಾರ್ಯಕರ್ತೆಯರ ಸಹಕಾರದಿಂದ  ಉಚಿತ ರೋಗ ನಿರೋಧಕ ಔಷಧಿ ವಿತರಣೆ ಕಾರ್ಯಕ್ರಮ ಬುಧವಾರ ನೆತ್ತಿಲ ಪದವು ಅಂಗನವಾಡಿಯಲ್ಲಿ ನಡೆಯಿತು.

ಸಮಾರಂಭದಲ್ಲಿ ಪಂ. ಉಪಾಧ್ಯಕ್ಷರಾದ ನಳಿನಾಕ್ಷಿ, ಪಂಚಾಯತಿ ಸದಸ್ಯರಾದ ಸುಜಾತ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳ, ಅಂಬುಜ, ಹಾಗೂ ಯಮುನ ಭಾಗವಹಿಸಿದ್ದರು.

ಆಸ್ಪತ್ರೆಯ ಕ್ಯಾಂಪ್‌ ಮುಖ್ಯಸ್ಥರಾದ ಅಬ್ದುಲ್ ರಝಾಕ್, ವೈದ್ಯರು ಗಳಾದ ಡಾ.ಶಶಿಕಾಂತ್ ಕಮರ್, ಡಾ.ಕಿರಣ ,ಡಾ.ಜಿನು ಜೋಸೆಫ್ ಹಾಗೂ ಸಿಬ್ಬಂದಿಗಳಾದ  ವಿಶಾಲಾಕ್ಷಿ, ಹರ್ಷಿತಾ ಭಾಗವಹಿಸಿದ್ದರು. ಸುಮಾರು 107 ಕುಟುಂಬದ ಸದಸ್ಯರು ತಮ್ಮ ತಮ್ಮ ಕುಟುಂಬದ 800ಕ್ಕೂ ಮಿಕ್ಕಿದ ಜನರಿಗೆ ರೋಗ ನಿರೋಧಕ ಮಾತ್ರೆ ಗಳನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News