ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ

Update: 2020-05-21 16:28 GMT

 ಹಿರಿಯಡ್ಕ, ಮೇ 21: ಪೆರ್ಡೂರು ಗ್ರಾಮದ ಅಲಂಗಾರು ಅಬ್ನಾರ್‌ಬೆಟ್ಟು ಎಂಬಲ್ಲಿ ಇಂದು ಬೆಳಗಿನ ಜಾವ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕಾರು ಚಾಲಕ, ಹೂಡೆಯ ಮೊಹಮ್ಮದ್ ಯಾಸೀರ್(19) ಹಾಗೂ ಕೆಮ್ಮಣ್ಣುವಿನ ಸುಹೇಬ್ ಹುಸೇನ್(20) ಬಂಧಿತ ಆರೋಪಿಗಳು. ಅಲ್ಪಾಜ್ ಹೂಡೆ ಎಂಬಾತ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾನೆ. ಬಂಧಿತರಿಂದ 3500ರೂ.ಮೌಲ್ಯದ ಎರಡು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News