ಮೂಡುಬಿದಿರೆ: ನೇಣು ಬಿಗಿದು ವೃದ್ಧ ಆತ್ಮಹತ್ಯೆ

Update: 2020-05-22 18:27 GMT

ಮೂಡುಬಿದಿರೆ: ಇಲ್ಲಿನ ವಿಜಯನಗರದ ಲಾವಂತಬೆಟ್ಟು ರಸ್ತೆ ನಿವಾಸಿ ದೇವದಾಸ ಮಲ್ಯ (65) ಗುರುವಾರ ಸಂಜೆ ತಮ್ಮ  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿದ್ದ ಪತ್ನಿ, ಪುತ್ರನನ್ನು ಪೇಟೆಗೆ ಖರೀದಿಗೆಂದು ಕಳುಹಿಸಿ ಮನೆಯಲ್ಲೇ ಉಳಿದುಕೊಂಡ ಅವರು ಈ ಕೃತ್ಯ ಎಸಗಿದ್ದಾರೆ. ಆಪ್ತ ಸಂಬಂಧಿಗಳ ನಿಧನದ ಹಿನ್ನೆಲೆಯಲ್ಲಿ ಖಿನ್ನರಾಗಿದ್ದ ಅವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಡಿಕೊಂಡಿದ್ದಾರೆ ಎನ್ನಲಾಗಿದೆ.

ಬೇಕರಿ ಉದ್ಯೋಗಿಯಾಗಿದ್ದ ಅವರು ಪತ್ನಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪುತ್ರ, ಬೆಂಗಳೂರಿನಲ್ಲಿರುವ ವಿವಾಹಿತೆ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News