ಮನೆಯಲ್ಲಿಯೇ ಈದ್ ಆಚರಿಸಿ: ಉಡುಪಿ ಜಿಲ್ಲಾಧಿಕಾರಿ

Update: 2020-05-23 14:49 GMT

ಉಡುಪಿ, ಮೇ 23: ಮುಸ್ಲಿಮರು ಮನೆಯಲ್ಲಿಯೇ ನಮಾಝ್ ನಿರ್ವಹಿಸುವ ಮೂಲಕ ಈದುಲ್ ಫಿತ್‌ರ್ ಹಬ್ಬವನ್ನು ಆಚರಿಸಬೇಕು. ಲಾಕ್ ಡೌನ್‌ನಲ್ಲಿ ಹಬ್ಬಕ್ಕೆ ವಿನಾಯಿತಿ ಕೊಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇಲ್ಲ. ಎಂಎಚ್‌ಎ ಮಾರ್ಗಸೂಚಿಗೆ ವಿರುದ್ಧವಾಗಿ ನಾವು ನಡೆದುಕೊಳ್ಳುವಂತೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಸರಕಾರದಿಂದಲೂ ರಿಯಾಯಿತಿ ನೀಡುವ ಬಗ್ಗೆ ಯಾವುದೇ ಸೂಚನೆಗಳು ಬಂದಿಲ್ಲ. ಆದುದರಿಂದ ಮುಸ್ಲಿಮರು ಮನೆಯಲ್ಲಿಯೇ ಹಬ್ಬವನ್ನು ಆಚರಿಸಬೇಕು. ನಾಳೆ ಸಂಪೂರ್ಣ ಲಾಕ್‌ಡೌನ್ ಆಗಿರುವುದರಿಂದ ಯಾರು ಕೂಡ ಹೊರಗಡೆ ಬಂದು ಓಡಾಡಲು ಅವಕಾಶ ಇಲ್ಲ. ದಯವಿಟ್ಟು ಎಲ್ಲರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News