ದನದ ಮಾಂಸ ಮಾರಾಟಕ್ಕೆ ಯತ್ನ: ಓರ್ವನ ಸೆರೆ

Update: 2020-05-23 15:52 GMT

ಕಾಪು, ಮೇ 23: ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲಿ ಮೇ 23ರಂದು ಬೆಳಗಿನ ಜಾವ ದನಗಳನ್ನು ಮಾಂಸ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಏಣಗುಡ್ಡೆ ಫಾರೆಸ್ಟ್ ಗೇಟ್ ಬಳಿಯ ನಿವಾಸಿ ಮಹಮ್ಮದ್ ಖಮುರುದ್ದೀನ್ (34) ಬಂಧಿತ ಆರೋಪಿ. ದಾಳಿ ವೇಳೆ ಪಕೀರಣಕಟ್ಟೆಯ ಶಿಫಾನ್ ಮತ್ತು ದಿಶಾನ್ ಎಂಬವರು ಓಡಿಹೋಗಿದ್ದಾರೆ. ಸ್ಥಳದಲ್ಲಿದ್ದ 15 ಕೆ.ಜಿ ದನದ ಮಾಂಸ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವುಗಳ ಒಟ್ಟು ಮೌಲ್ಯ 53,300ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News