ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳದ ವ್ಯಕ್ತಿಯನ್ನು ಥಳಿಸಿ ಕೊಂದ ಸೋದರ ಸಂಬಂಧಿಗಳು

Update: 2020-05-24 05:57 GMT

ಬಿಜ್ನೋರ್(ಉ.ಪ್ರ),ಮೇ 24: ದಿಲ್ಲಿಯಿಂದ ತನ್ನ ಸ್ವಗ್ರಾಮ ಬಿಜ್ನೋರ್‌ನ ಮಲಕಪುರಕ್ಕೆ ಮರಳಿದ್ದ ವ್ಯಕ್ತಿಯು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳದ್ದಕ್ಕಾಗಿ ಕುಪಿತ ಸೋದರ ಸಂಬಂಧಿಗಳು ಆತನನ್ನು ಥಳಿಸಿ ಕೊಂದಿದ್ದಾರೆ.

ದಿನಗೂಲಿ ಕಾರ್ಮಿಕ ಮಂಜೀತ್ ಸಿಂಗ್(23) ಮೇ 19ರಂದು ದಿಲ್ಲಿಯಿಂದ ಬಿಜ್ನೋರ್ ತಲುಪಿದಾಗ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಿದ್ದ. ಆತನ ವರದಿ ನೆಗೆಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಕೋವಿಡ್-19 ಪರೀಕ್ಷೆಯನ್ನು ನಡೆಸಿರಲಿಲ್ಲ.

ಮಂಜೀತ್ ಸಿಂಗ್ ಸೋಂಕಿಗೆ ತುತ್ತಾಗಿದ್ದನೆಂದು ಶಂಕಿಸಿದ್ದ ಸೋದರ ಸಂಬಂಧಿಗಳಾದ ಕಪಿಲ ಮತ್ತು ಮನೋಜ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಈ ವೇಳೆ ಅವರ ನಡುವೆ ವಾಗ್ಯುದ್ಧ ನಡೆದು,ಅವರಿಬ್ಬರೂ ಲಾಠಿಗಳಿಂದ ಮಂಜೀತ್ ಸಿಂಗ್‌ನನ್ನು ಬರ್ಬರವಾಗಿ ಥಳಿಸಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಮಂಜೀತ್ ಸಿಂಗ್ ಬಳಿಕ ಮೀರತ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News