ವಿಮಾನ ಹಾರಾಟ ಪುನರಾರಂಭಕ್ಕೆ ಇನ್ನೂ ಸಮಯಬೇಕು: ಉದ್ಧವ್ ಠಾಕ್ರೆ

Update: 2020-05-24 12:08 GMT

ಮುಂಬೈ, ಮೇ 24: ದೇಶಿಯ ವಿಮಾನ ಹಾರಾಟ ಪುನರಾರಂಭಕ್ಕೆ ಮಹಾರಾಷ್ಟ್ರಕ್ಕೆ ಇನ್ನಷ್ಟು ಸಮಯ ಅಗತ್ಯವಿದೆ. ಮೇ 31ಕ್ಕೆ ರಾಜ್ಯದಲ್ಲಿರುವ ಲಾಕ್‌ಡೌನ್ ಅಂತ್ಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರವಿವಾರ ಹೇಳಿದ್ದಾರೆ.

ನಾನು ಈ ಕುರಿತಂತೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆಗೆ ಮಾತನಾಡುವೆ. ವಿಮಾನ ಯಾನದ ಅಗತ್ಯದ ಬಗ್ಗೆ ನನಗೆ ಅರ್ಥವಾಗುತ್ತದೆ. ಆದರೆ, ನಮಗೆ ತಯಾರಾಗಲು ಸಮಯ ಬೇಕು ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.

ದೇಶೀಯ ವಿಮಾನ ಹಾರಾಟವನ್ನು ಮತ್ತೆ ಆರಂಭಿಸಲಾಗುವುದು ಎಂದು ಇತ್ತೀಚೆಗೆ ಕೇಂದ್ರ ಸರಕಾರ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News