ಟೀಮ್ ಬಿ-ಹ್ಯೂಮನ್, ಹಿದಾಯ ಫೌಂಡೇಶನ್ ನಿಂದ 450 ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ

Update: 2020-05-24 14:36 GMT

ಮಂಗಳೂರು: ದ.ಕ ಜಿಲ್ಲೆಯ ವಿವಿಧೆಡೆ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ವತಿಯಿಂದ 450 ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.

ಜಿಲ್ಲೆಯ ಹಲವು ತಾಲೂಕಿನ ಹಳ್ಳಿ ಪ್ರದೇಶಗಳಿಗೆ ತೆರಳಿ ಸುಮಾರು 450 ಅರ್ಹ ಬಡ ಕುಟುಂಬಗಳಿಗೆ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಈದ್ ಹಬ್ಬ ದಿನ ಬೇಕಾದ ದಿನಸಿ ಸಾಮಗ್ರಿಗಳ ಈದ್ ಕಿಟ್ ನ್ನು ವಿತರಿಸಿತು.

ಮಂಗಳೂರಿನ ಪಂಜಿಮುಗೇರು, ಕುಂಜತ್ತಬೈಲ್, ಪಡೀಲ್, ಉಳ್ಳಾಲ ಭಾಗದ ಸೋಮೇಶ್ವರ, ಉಚ್ಚಿಲ ಕೋಟೆಕಾರ್, ಅಜ್ಜಿನಡ್ಕ, ಪೆರಬೈಲ್, ಬಟ್ಟಪ್ಪಾಡಿ, ಮಂಚಿಲ, ಮಾಡೂರು ಬೀರಿ, ಬಂಟ್ವಾಳ ತಾಲೂಕಿನ ಅಕ್ಕರಂಗಡಿ, ಮೇರಮಜಲ್, ಕಾವಲ್ ಕಟ್ಟೆ, ಅಮ್ಮೆಮಾರ್, ಫರಂಗಿಪೇಟೆ, ಪುತ್ತೂರು ತಾಲೂಕಿನ ಅಂಕತ್ತಡ್ಕ, ನಿಡ್ಯಾನದಲ್ಲಿನ ಬಡ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News