ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿದ ಆರೋಪ : ಪ್ರಕರಣ ದಾಖಲು
Update: 2020-05-25 17:50 GMT
ಕಾಪು, ಮೇ 25: ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿ ಮೂಳೂರು ಗ್ರೀನ್ ಪ್ಯಾರಡೈಸ್ ಲೇಔಟ್ ಸಮೀಪದ ಸೇತುವೆಯಿಂದ ಮೇ 24ರಂದು ರಾತ್ರಿ ವೇಳೆ ತ್ಯಾಜ್ಯ ಎಸೆಯಲು ಬಂದಿದ್ದ ಮೂಳೂರು ಮೂಲಸ್ಥಾನ ಬಳಿಯ ನಿವಾಸಿ ಅಬ್ದುಲ್ ಖಾದರ್ (45) ಹಾಗೂ ಅವರ ಮಗ ನಸ್ರುಲ್ಲಾ (19) ಎಂಬವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.