ಉಡುಪಿ : 45 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಲೂಟಿ

Update: 2020-05-25 17:54 GMT

ಉಡುಪಿ, ಮೇ 25: ಚಿನ್ನದ ವ್ಯಾಪಾರಿಯಿಂದ ಲಕ್ಷಾಂತರ ರೂ. ವೌಲ್ಯದ ಚಿನ್ನದ ಗಟ್ಟಿಯನ್ನು ದೋಚಿ ಪರಾರಿಯಾಗಿರುವ ನಗರದ ಬೀಡಿನ ಗುಡ್ಡೆಯ ಸರ್ಕಲ್ ಬಳಿ ಮೇ 25ರಂದು ಬೆಳಗಿನ ಜಾವ 5.30ರ ಸುಮಾರಿಗೆ ನಡೆದಿದೆ.

ಬನ್ನಂಜೆ ನಿವಾಸಿಯಾಗಿರುವ ವಿಜಯ್ ಜಾದವ್ ಬೀಡಿನಗುಡ್ಡೆಯ ಸರ್ಕಲ್ ಬಳಿಯ ಲಕ್ಷ್ಮೀ ಟ್ರೇಡರ್ಸ್ ಸೆಂಟರ್‌ನ ಎರಡನೆ ಮಹಡಿಯಲ್ಲಿನ ಅಂಗಡಿಯಲ್ಲಿ ಹಳೆಯ ಚಿನ್ನವನ್ನು ಕರಗಿಸಿ, ಚಿನ್ನದ ಗಟ್ಟಿಗಳನ್ನಾಗಿ ಮಾಡುವ ಕೆಲಸವನ್ನು ಮಾಡಿಕೊಂಡಿದ್ದರು.

ಇವರು ಚಿನ್ನದ ಕೆಲಸಗಾರರು ಮತ್ತು ಚಿನ್ನದ ವ್ಯಾಪಾರಿಗಳಿಂದ ಪಡೆದ ಹಳೆಯ ಚಿನ್ನವನ್ನು ಕರಗಿಸಿ, ಗಟ್ಟಿಗಳನ್ನಾಗಿ ಮಾಡಿಕೊಂಡಿದ್ದ 45 ಲಕ್ಷ ರೂ. ಮೌಲ್ಯದ ಅಂದಾಜು ಒಂದು ಕೆ.ಜಿ. 227 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು, ತಮ್ಮ ಅಂಗಡಿಯ ಶಟರ್ ಬೀವನ್ನು ತೆಗೆಯುತ್ತಿದ್ದರೆನ್ನಲಾಗಿದೆ.

ಆಗ ಅಲ್ಲಿಗೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿದ ಬಂದ ಇಬ್ಬರು ಅಪರಿಚಿತರು ವಿಜಯ್ ಜಾದವ್ ಬಳಿ ಇದ್ದ ಚಿನ್ನದ ಗಟ್ಟಿ ಇರುವ ಚೀಲವನ್ನು ಬಲತ್ಕಾರ ವಾಗಿ ಕಿತ್ತುಕೊಂಡು ಓಡಿಹೋಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News