ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸ್ವಾವಲಂಬನೆಗೆ ಒತ್ತು: ಉಡುಪಿ ಜಿಲ್ಲಾ ಬಿಜೆಪಿ

Update: 2020-05-26 12:56 GMT

ಉಡುಪಿ, ಮೇ 26: ಕೊರೋನಾ ಸಂಕಷ್ಟದಿಂದಾಗಿ ದುಡಿಮೆ ದುಸ್ತರ ವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತಾಪಿ ವರ್ಗದ ಯುವ ಶಕ್ತಿಯ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಗ್ರಾಮೀಣ ಪ್ರದೇಶಗಳ ಯುವಕರು ಸ್ವಸಹಾಯ ಸಂಘಗಳ ಮಾದರಿಯಲ್ಲಿ ತಾವೇ ಬೆಳೆದ ಕೃಷಿ ಉತ್ಪನ್ನಗಳಿಗೆ ಸರಕಾರದ ನೆರವಿನ ಮೂಲಕ ಸ್ವತ: ಮಾರುಕಟ್ಟೆ ಒದಗಿಸಲಿರುವ ಪರಿಕಲ್ಪನೆ ಉತ್ಕೃಷ್ಟವಾದುದು. ಗ್ರಾಹಕರಿಗೆ ನ್ಯಾಯ ಬೆಲೆಯಲ್ಲಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನಗಳನ್ನು ಒದಗಿಸುವ ಈ ನೂತನ ಸ್ವಾವಲಂಬಿ ಯೋಜನೆ ಸ್ವಉದ್ಯೋಗದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಒತ್ತು ನೀಡಲಿದೆ ಎಂದು ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News