ವಾರಸುದಾರರಿಗೆ ಸೂಚನೆ

Update: 2020-05-26 12:57 GMT

ಉಡುಪಿ, ಮೇ 26: ಕಳೆದ ಮೇ 20ರಂದು ಬೆಳಗ್ಗೆ ಉಡುಪಿ ಸಿಟಿ ಬಸ್‌ನಿಲ್ದಾಣದ ಬಳಿ ಗಂಭೀರ ಸ್ವರೂಪದ ರಕ್ತಗಾಯಗಳೊಂದಿಗೆ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸುಮಾರು 35ವರ್ಷ ಪ್ರಾಯದ ಅಪರಿಚಿತ ಯುವಕ ನೊಬ್ಬನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಅದೇ ದಿನ ಮೃತಪಟ್ಟಿದ್ದಾನೆ.

ಮೃತನು ವಲಸೆ ಕೂಲಿ ಕಾರ್ಮಿಕನಂತೆ ಕಂಡುಬರುತ್ತಿದ್ದು, ಆಕಸ್ಮಿಕವಾಗಿ ಬಿದ್ದೋ ಅಥವಾ ವಿಪರೀತ ಮದ್ಯಪಾನ ಮಾಡಿ ಬಿದ್ದು, ತಲೆಗೆ ಆದ ಗಾಯದಿಂದ ಮೃತಪಟ್ಟಂತೆ ಕಂಡುಬರುತ್ತಿದ್ದು, ಮೃತದೇಹವನ್ನು ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಿಡಲಾಗಿದೆ. ಮೃತರ ವಾರಸುದಾರರು/ರಕ್ತ ಸಂಬಂಧಿಕರು ಇದ್ದಲ್ಲಿ, ಪೋಲಿಸ್ ಅಧೀಕ್ಷಕರು ಉಡುಪಿ ಜಿಲ್ಲೆ ಅಥವಾ ಪೋಲಿಸ್ ವೃತ್ತ ನಿರೀಕ್ಷಕರು ಉಡುಪಿ, ಪೋಲಿಸ್ ಉಪನಿರೀಕ್ಷಕರು ಉಡುಪಿ ನಗರಠಾಣೆ, ಪಿಎಸ್‌ಐ ಉಡುಪಿ ನಗರ ಪೋಲಿಸ್ ಠಾಣೆ: 0820-2520444, ಪೋಲಿಸ್ ವೃತ್ತ ನಿರೀಕ್ಷಕರು: 0820-2520329, ಉಡುಪಿ ಜಿಲ್ಲಾ ನಿಸ್ತುಂತು ಕಚೇರಿ :0820-2526444 ಇವರನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೋಲಿಸ್ ಠಾಣೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News