ಅತ್ತಾವರ ಕೆ. ವಿಠಲ ಶಾಸ್ತ್ರಿ ನಿಧನ
Update: 2020-05-26 17:31 GMT
ಮಂಗಳೂರು, ಮೇ 26: ನಗರದ ಅತ್ತಾವರದ ಸುಪರ್ ಇಲೆಕ್ಟ್ರಿಕಲ್ ವೈಂಡರ್ಸ್ನ ಸ್ಥಾಪಕ ಕೆ. ವಿಠಲ ಶಾಸ್ತ್ರಿ (85) ಮಂಗಳವಾರ ಅತ್ತಾವರದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಎಂ.ಬಿ.ಪುರಾಣಿಕ ಸಂತಾಪ ಸೂಚಿಸಿದ್ದಾರೆ.