ತನ್ನ ಬಳಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ವಿಮಾನದಲ್ಲಿ ಊರಿಗೆ ಕಳುಹಿಸಿದ ಕೃಷಿಕ

Update: 2020-05-27 12:23 GMT

ಹೊಸದಿಲ್ಲಿ: ತನ್ನ ಬಳಿ ಕೆಲಸ ಮಾಡುತ್ತಿದ್ದ ಬಿಹಾರದ 10 ಮಂದಿ ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ವಾಪಸ್ ಕಳುಹಿಸಲು ವಿಮಾನಗಳ ಟಿಕೆಟ್‍ಗಾಗಿ ರೂ 70,000 ವ್ಯಯಿಸಿದ ದಿಲ್ಲಿಯ ತಿಗಿಪುರ್ ಎಂಬಲ್ಲಿನ ಅಣಬೆ ಕೃಷಿಕ ಎಲ್ಲರ ಮನಗೆದ್ದಿದ್ದಾರೆ. ಅಷ್ಟೇ ಅಲ್ಲ ಕಳೆದ ಎರಡು ತಿಂಗಳುಗಳಿಂದ ಅವರು ತಮ್ಮ ಎಲ್ಲಾ ಕಾರ್ಮಿಕರಿಗೆ ಆಶ್ರಯವೊದಗಿಸಿ ಅವರ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸುತ್ತಿದ್ದಾರೆ.

“ನಾನು ಯಾವತ್ತಾದರೂ ವಿಮಾನದಲ್ಲಿ ಪ್ರಯಾಣಿಸುತ್ತೇನೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ'' ಎಂದು ಕೃಷಿಕ ಪಪ್ಪನ್ ಸಿಂಗ್ ಅವರ ಬಳಿ ಕೆಲಸಕ್ಕಿದ್ದ ಲಖ್ವಿಂದರ್ ರಾಮ್ ಹೇಳುತ್ತಾರೆ.

ಪಪ್ಪನ್ ಸಿಂಗ್ ಅವರ ಕೆಲಸಗಾರರು ತೆರಳಲಿರುವ ವಿಮಾನ  ಗುರುವಾರ ಸಂಜೆ ದಿಲ್ಲಿ ವಿಮಾನ ನಿಲ್ದಾಣದಿಂದ ತೆರಳಲಿದೆ. ಎಲ್ಲರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಪ್ರಯಾಣಕ್ಕೆ ಅಗತ್ಯವಾದ ವೈದ್ಯಕೀಯ ಪ್ರಮಾಣಪತ್ರವೂ ಅವರ  ಬಳಿಯಿದೆ. ಕಾರ್ಮಿಕರು ಬಿಹಾರದ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿದೊಡನೆ ಅವರನ್ನು ಸಹಸ್ರ ಜಿಲ್ಲೆಯಲ್ಲಿರುವ ಅವರ ಗ್ರಾಮಗಳಿಗೆ ತಲುಪಿಸಲು ಬಸ್ಸಿನ ಏರ್ಪಾಟನ್ನು ಕೂಡ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News