ಹಣದ ವಿಚಾರ: ಕೆರೆಗೆ ಹಾರಿ ಹೊಟೇಲ್ ಉದ್ಯಮಿ ಆತ್ಮಹತ್ಯೆ

Update: 2020-05-27 17:22 GMT

ಕುಂದಾಪುರ, ಮೇ 27: ಹಣದ ವಿಚಾರವಾಗಿ ಮಾನಸಿಕವಾಗಿ ನೊಂದ ಹೊಟೇಲ್ ಉದ್ಯಮಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಮೇ 27ರಂದು ನಸುಕಿನ ವೇಳೆ ಜಪ್ತಿ ಎಂಬಲ್ಲಿ ನಡೆದಿದೆ.

ಮೃತರನ್ನು ಜಪ್ತಿಯ ತೇಜಪ್ಪ ಶೆಟ್ಟಿ ಎಂಬವರ ಮಗ ವಿಠಲ್ ಶೆಟ್ಟಿ(50) ಎಂದು ಗುರುತಿಸಲಾಗಿದೆ. ಮೇ 26ರಂದು ಊಟ ಮಾಡಿ ರಾತ್ರಿ ಮಲಗಿದ್ದ ಇವರು, ‘ಹೊಟೇಲಿನ ವ್ಯವಹಾರದಲ್ಲಿ ಕೆಲವೊಂದು ವ್ಯಕ್ತಿಗಳಿಂದ ಹಣ ಬರ ಬೇಕಾಗಿದ್ದು, ನಾನು ತುಂಬಾ ಕಷ್ಠದಲ್ಲಿ ಇರುವುದರಿಂದ ನಿಮಗೆ ಇನ್ನು ಮುಂದಕ್ಕೆ ಜೀವಂತ ಸಿಗುವುದಿಲ್ಲ’ ಎಂಬುದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದರು.

ಬಳಿಕ ಇವರನ್ನು ಹುಡುಕಾಡಿದಾಗ ಮೇ 27ರಂದು ಬೆಳಗ್ಗೆ 7ಗಂಟೆಗೆ ಇವರ ಮೃತದೇಹವು ಅವರ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಇವರು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News