ಮಸೀದಿ ತೆರೆಯುವ ಬಗ್ಗೆ ಗೊಂದಲ ಬೇಡ: ಮಸೂದ್

Update: 2020-05-27 17:42 GMT

ಮಂಗಳೂರು, ಮೇ 27: ಕೊರೋನ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್ ತೆರವುಗೊಳಿಸಿ ಪ್ರಾರ್ಥನಾಲಯಗಳ ಬಾಗಿಲು ತೆರೆಯಲು ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಹೇಳಿಕೆ ನೀಡಿದ್ದಾರೆ.

ಹಾಗಾಗಿ ಈ ಬಗ್ಗೆ ಸರಕಾರದ ಆದೇಶ ಬರುವವರೆಗೆ ಮಸೀದಿ ತೆರೆಯುವ ಬಗ್ಗೆ ಯಾರು ಗೊಂದಲ ಉಂಟು ಮಾಡಬಾರದು ಮತ್ತು ಎಲ್ಲರೂ ಶಾಂತಿಯಿಂದ ಇರಬೇಕು ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News