ಮೇ 28: ವಿದ್ಯುತ್ ಸಂಪರ್ಕ ಕಡಿತ

Update: 2020-05-27 17:43 GMT

ಮಂಗಳೂರು, ಮೇ 27: ನಗರ ಹೊರವಲಯದ ಕಾನ/ಚೇಳ್ಯಾರು/ಕುತ್ತೆತ್ತೂರು ಇದರ ಫೀಡತ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕಾನ, ಕಟ್ಲ, 9ನೇ ಬ್ಲಾಕ್, ಖಡ್ಗೇಶ್ವರಿ, 6ನೇ ಬ್ಲಾಕ್, ಚೊಕ್ಕಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

ನಗರದ ಯೆಯ್ಯಡಿ/ಹರಿಪದವು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 28ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಯೆಯ್ಯೆಡಿ, ಮೇರಿಹಿಲ್, ಬಾರೆಬೈಲ್, ವ್ಯಾಸನಗರ, ಬೋಂದೆಲ್, ಪದವಿನಂಗಡಿ, ಗುರುನಗರ, ಕೊಪ್ಪಲಕಾಡು, ಲ್ಯಾಂಡ್‌ಲಿಂಕ್ಸ್, ಎದುರು ಪದವು, ಪೆರ್ಲಗುರಿ, ದಂಡಕೇರಿ, ಕುಂಟಲ್ಪಾಡಿ, ಅಚ್ಚುಕೋಡಿ, ಬೋಂದೆಲ್, ಕೃಷ್ಣನಗರ, ಕೆಪಿಟಿಸಿಎಲ್ ಕಾಲನಿ, ಪಚ್ಚನಾಡಿ, ಶಿವಾಜಿನಗರ, ಕಾರ್ಮಿಕನಗರ, ಆಶ್ರಯ ಕಾಲೊನಿ, ಬಜಪೆ ಸಿಟಿ, ಪೆರ್ಮುದೆ, ಸ್ವಾಮಿಲಪದವು, ಭಟ್ರಕೆರೆ, ಎಕ್ಕಾರು, ಹುಣ್ಸೆಕಟ್ಟೆ, ಕ್ರಾಸ್ ಪದವು, ಶಿಬರೂರು, ಬೋಳಿಮಾರ್, ಆಣೆಬರಿ, ಬಡಗ ಎಕ್ಕಾರು, ಕಟೀಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಳಿದೆ ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News