ದ.ಕ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ವತಿಯಿಂದ ಗೂಡಿನ ಬಳಿಯ ಸಾಹಸಿ ಯುವಕರಿಗೆ ಸನ್ಮಾನ

Update: 2020-05-27 18:01 GMT

ಮಂಗಳೂರು : ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ಯುವಕನ ಜೀವ ಉಳಿಸಲು ತಮ್ಮ ಜೀವದ ಹಂಗನ್ನು ತೊರೆದು ನದಿಗೆ ಹಾರಿ  ಯುವಕನ ಶರೀರವನ್ನು ಮೇಲೆತ್ತಿ ರಕ್ಷಿಸಲು ಯತ್ನಿಸಿದ ಗೂಡಿನಬಳಿಯ ಶಮೀರ್, ಮುಖ್ತಾರ್, ಮೊಹಮ್ಮದ್, ತೌಶೀಫ್, ಝಾಹಿದ್, ಆರಿಫ್ ಹೈವೆ ಇನ್ ಎಂಬವರನ್ನು ಮುಸ್ಲಿಂ ಯೂತ್ ಲೀಗ್ ದ.ಕ ಜಿಲ್ಲಾ ಸಮಿತಿ ಹಾಗೂ ಮುಸ್ಲಿಂ ಯೂತ್ ಲೀಗ್ ಅಡ್ಯಾರ್ ಕಣ್ಣೂರ್ ಸಮಿತಿ ವತಿಯಿಂದ ಪಾಣಕ್ಕಾಡ್ ಮೊಹಮ್ಮದ್ ಅಲಿ ಶಿಹಾಬ್ ತಂಙಳ್ ಮೆಮೋರಿಯಲ್ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಯೂತ್ ಲೀಗ್ ದ.ಕ ಜಿಲ್ಲಾದ್ಯಕ್ಷರಾದ ಸಯ್ಯದ್ ಅಫ್ಹಾಂ ಅಲಿ ತಂಙಳ್. ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಪ್ರ.ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ಕೋಶಾಧಿಕಾರಿ ಹೈದರ್ ಕಳಂಜ, ಅಡ್ಯಾರ್ ಕಣ್ಣೂರ್ ಮುಸ್ಲಿಂ ಲೀಗ್ ಮುಖಂಡರಾದ ಅಬ್ದುಲ್ ಲತೀಫ್, ಮುಸ್ಲಿಂ ಯೂತ್ ಲೀಗ್ ಅಡ್ಯಾರ್ ಕಣ್ಣೂರ್ ಪ್ರ.ಕಾರ್ಯದರ್ಶಿ ತೌಸೀಫ್ ಕಣ್ಣೂರ್, ಕೋಶಾಧಿಕಾರಿ ಮುದಸ್ಸಿರ್, ಸ್ಥಳೀಯ ಮುಖಂಡರಾದ ಅಹ್ಮದ್ ಬಾವ ಮಾನಾಲ, ಕೆ.ಎಚ್.ಎಸ್.ಆಶ್ರಫ್, ಜಿಲ್ಲಾ ಮುಸ್ಲಿಂ ಲೀಗ್ ನಾಯಕರಾದ ರಿಯಾಝ್ ಹರೇಕಳ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ, ರಿಯಾಝ್ ಕಣ್ಣೂರ್  ಮುಂತಾವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News