ಬಾಲಕನ ಮೇಲೆ ಹಲ್ಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಡಿವೈಎಫ್ಐ‌ ಒತ್ತಾಯ

Update: 2020-05-28 09:33 GMT

ವಿಟ್ಲ: ಅಪ್ರಾಪ್ತ ಹುಡುಗನ‌ ಮೇಲೆ ದುಷ್ಕರ್ಮಿಯೋರ್ವ ಜೈ ಶ್ರೀರಾಮ್ ಹೇಳುವಂತೆ ಬಲವಂತ ಮಾಡಿ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಬಂಧಿಸಬೇಕು ಎಂದು ಡಿವೈಎಫ್ಐ ವಿಟ್ಲ ವಲಯ ಸಮಿತಿ ಒತ್ತಾಯಿಸಿದೆ.

ಹಲ್ಲೆಗೆ ಒಳಗಾದ ಬಾಲಕನ‌ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಹಾಗೂ ಇಂತಹ ಘಟನೆಗಳಿಂದ ಕೋಮುಗಲಭೆಗಳು‌ ಸೃಷ್ಟಿ ಯಾಗಲು ಕಾರಣವಾಗುತ್ತಿದ್ದು, ಕೂಡಲೇ ಇಂತಹ ರೌಡಿ ಶೀಟರ್ ಗಳನ್ನು ಬಂಧಿಸಿ ಸಮಾಜದ ನೆಮ್ಮದಿ ಕಾಪಾಡಬೇಕು ಎಂದು ವಿಟ್ಲ ಪೋಲಿಸರನ್ನು ಡಿವೈಎಫ್ಐ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News