‘ವಾರ್ತಾಭಾರತಿ’ ವರದಿ ಫಲಶ್ರುತಿ: ಕಾಶಿಪಟ್ಣದ ಯುವಕನಿಗೆ ಆರ್ಥಿಕ ನೆರವು

Update: 2020-05-28 15:41 GMT

ಮಂಗಳೂರು, ಮೇ 28: ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಸಮೀಪದ ದರ್ಖಾಸು ಮನೆಯ ನಿವಾಸಿ ಮುಹಮ್ಮದ್ ಹನೀಫ್ (36) ಎಂಬವರಿಗೆ ಕಾಶಿಪಟ್ಣದ ದಾರುನ್ನೂರು ಅರೆಬಿಕ್ ಕಾಲೇಜು ವತಿಯಿಂದ ಗುರುವಾರ ಧನಸಹಾಯ ನೀಡಲಾಯಿತು.

‘ವಾರ್ತಾಭಾರತಿ’ಯಲ್ಲಿ ಪ್ರಕಟಗೊಂಡ ವರದಿಯನ್ನು ಗಮನಿಸಿದ ದಾರುನ್ನೂರ್ ಸಂಸ್ಥೆಯ ಮುಖ್ಯಸ್ಥರು ಹನೀಫ್‌ರ ಮನೆಗೆ ತೆರಳಿ ನೆರವು ನೀಡಿದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ಅಮ್ಮೆಮಾರ್, ಉಪಾಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್, ಸಂಸ್ಥೆಯ ಪಿ.ಟಿ. ಅಧ್ಯಕ್ಷ ಪಕೀರಬ್ಬ ಮಾಸ್ಟರ್, ಜೊತೆ ಕಾರ್ಯದರ್ಶಿ ಹಾಜಿ ಅಬ್ದುಸಮದ್, ಅದ್ದು ಹಾಜಿ, ಹಾಜಿ ನೌಷಾದ್ ಸೂರಲ್ಪಾಡಿ, ಸದಸ್ಯರಾದ ಅಬ್ದುರ್ರಹ್ಮಾನ್ ಎ.ಆರ್. ಫ್ಲವರ್, ಹಾಜಿ ಆಸೀಫ್ ಸೂರಲ್ಪಾಡಿ, ಮ್ಯಾನೇಜರ್ ಅಬ್ದುಲ್ ಹಕೀಂ, ಪ್ರಾಧ್ಯಾಪಕ ಮೊಹಿನುದ್ದೀನ್ ಜಿಸ್ತಿ ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News