ನದಿಗೆ ಬಿದ್ದು ಮೃತ್ಯು

Update: 2020-05-29 15:57 GMT

ಬ್ರಹ್ಮಾವರ, ಮೇ 29: ಕಚ್ಚೂರು ಸೀತಾನದಿಯ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಬಾರಕೂರು ಹನೇಹಳ್ಳಿ ಗ್ರಾಮದ ರಾಜೀವ ಶೆಟ್ಟಿ(82) ಎಂದು ಗುರುತಿಸಲಾಗಿದೆ. ಇವರು ಮೇ 28ರಂದು ಸಂಜೆ ಮನೆಯಿಂದ ಬಾರ್ಕೂರು ಪೇಟೆಗೆ ಹೋಗಿ, ರಾತ್ರಿ ವಾಪಾಸ್ಸು ಬರುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದರು. ಇವರ ಮೃತದೇಹ ಇಂದು ಬೆಳಗ್ಗೆ ಪತ್ತೆ ಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News