ಉರ್ವಸ್ಟೋರ್ : ಕಾರು ಢಿಕ್ಕಿ; ಗಾಯಾಳು‌ ಮೃತ್ಯು

Update: 2020-05-29 16:55 GMT

ಮಂಗಳೂರು, ಮೇ 29: ನಗರದ ಉರ್ವಸ್ಟೋರ್ ಬಳಿ ಮೇ 25 ರಂದು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅಶೋಕ ನಗರದ ನಿವಾಸಿ ಸೀತಾರಾಮ್ (60) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೇ 29ರಂದು ಮೃತಪಟ್ಟಿದ್ದಾರೆ.

ಮೇ 25 ರಂದು ಬೆಳಗ್ಗೆ 9 ಗಂಟೆಗೆ ಮೀನು ಖರೀದಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಸೀತಾರಾಮ್ ಅವರಿಗೆ ಕಾರು ಢಿಕ್ಕಿ ಯಾಗಿತ್ತು. ಈ ಬಗ್ಗೆ ಟ್ರಾಫಿಕ್ ಪಶ್ಚಿಮ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News