ಉಡುಪಿ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ರಚನೆ
Update: 2020-05-29 17:26 GMT
ಉಡುಪಿ, ಮೇ 29: ಉಡುಪಿ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ (ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ) ಸಮಿತಿಯನ್ನು ರಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ರಘುಪತಿ ಭಟ್, ಸದಸ್ಯರುಗಳಾಗಿ ಸಾಮಾನ್ಯ- ರಾಜು ಪೂಜಾರಿ ಜಾತಬೆಟ್ಟು, ಮಹಿಳೆ- ರಜನಿ ಎ.ಶೆಟ್ಟಿ ಕಾಯಿನಾಡಿ, ಪರಿಶಿಷ್ಟ ಪಂಗಡ ಮಾಧವ ಕೊಟ್ಟಂಬೈಲು ಹಾಗೂ ಕಾರ್ಯ ದರ್ಶಿಯಾಗಿ ತಹಶೀಲ್ದಾರ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಮಿತಿ ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.