ಕೊರೋನ ಯೋಧರಿ‌ಗೆ ಕೂಡಲೇ ವೇತನ ನೀಡಲು ಯು.ಟಿ.ಖಾದರ್ ಆಗ್ರಹ

Update: 2020-05-30 08:48 GMT

ಮಂಗಳೂರು, ಮೇ 30: ಕೊರೋನ ಯೋಧರು‌ಗಳಾಗಿ ದುಡಿಯುತ್ತಿರುವ ಆರೋಗ್ಯ ಇಲಾಖೆಯ ಎನ್.ಎಚ್.ಎಂ. ಗುತ್ತಿಗೆ ಸಿಬ್ಬಂದಿಗೆ ಎರಡು ತಿಂಗಳಿನಿಂದ ವೇತನ ನೀಡದೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಹೇಳಿಕೆ ನೀಡಿದ ಅವರು, ಹೂ ಸುರಿದು, ಚಪ್ಪಾಳೆ ಹೊಡೆದರೆ ಸಾಲದು. ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯನಿರ್ವಹಿಸುವ ಕೊರೋನ ಯೋಧರಿ‌ಗೆ ವೇತನ ನೀಡಿದರೆ ಮಾತ್ರ ಅವರು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಕೊರೋನ ಯೋಧರಿ‌ಗೆ ಸರಕಾರ ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದೆ. ಅವರಿಗೆ ಈ ಸಂದರ್ಭ ಒಳ್ಳೆಯ ಪ್ಯಾಕೇಜ್ ನೀಡಬೇಕಿತ್ತು. ಆದರೆ ಅವರಿಗೆ ತಿಂಗಳಿಗೆ ನೀಡಬೇಕಾದ ನಿಗದಿತ ವೇತನವನ್ನೇ ನೀಡಿಲ್ಲ. ರಾಜ್ಯದ ಸುಮಾರು 23 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಯ ಕುಟುಂಬ ಸರಕಾರದ ಈ ತಪ್ಪಿನಿಂದಾಗಿ ಬೀದಿಗೆ ಬೀಳುವಂತಾಗಿದೆ ಎಂದು ಅವರು ದೂರಿದರು.

ಕೊರೋನ ವಿರುದ್ಧ ಹೋರಾಡಲು ಪಿಎಂ ಕೇರ್ಸ್‌ಗೆ ಸಾಕಷ್ಟು ಅನುದಾನ ಹರಿದು ಬಂದಿದೆ. ಈ ಹಣವನ್ನು ಕೊರೋನ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗೆ ನೀಡುವ ಕೆಲಸವನ್ನು ಸರಕಾರ ಮಾಡಬೇಕು. ಪಿಎಂ ಕೇರ್ಸ್‌ಗೆ ಎಷ್ಟು ಹಣ ಬಂದಿದೆ ಎನ್ನುವುದನ್ನೂ ಕೇಂದ್ರ ಸರಕಾರ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಮೇಲೆ ನಿಷೇಧ ಹೇರಲಾಗಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಸರಕಾರದ ಈ ನಿರ್ಧಾರ ಸರಿಯಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ನಮ್ಮವರಲ್ಲವೇ? ಎಂದವರು ಪ್ರಶ್ನಿಸಿದರು. ಹೊರ ರಾಜ್ಯದ ಕಾರ್ಮಿಕರನ್ನು ಕರೆತರುವ ವಿಚಾರದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರ ತಪ್ಪು. ಪರವೂರಿನಲ್ಲಿರುವ ಎಲ್ಲ ನಮ್ಮವನ್ನು ಕರೆತರಲು ಸರಕಾರ ತಕ್ಷಣ ಕ್ರಮ ವಹಿಸಬೇಕು. ಅವರನ್ನು ಕುಟುಂಬದಿಂದ ದೂರ ಮಾಡುವ ಕೆಲಸವನ್ನು ಸರಕಾರ ಮಾಡಬಾರದು ಎಂದು ಅವರು ಆಗ್ರಹಿಸಿದರು.

ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಆರಂಭದಲ್ಲಿ ಸಾಕಷ್ಟು ವ್ಯವಸ್ಥೆ ಇದೆ ಎಂದು ಸಚಿವರು, ಸಂಸದರು ಕೊಚ್ಚಿಕೊಂಡರು. ರೈಲಿನಲ್ಲೂ ವ್ಯವಸ್ಥೆ ಇದೆ ಎಂದು ಹೇಳಿದ್ದರು. ಆದರೆ ಈಗ ಕಾರ್ಮಿಕರನ್ನು ಇಲ್ಲಿಗೆ ಕರೆಸಿ ಕ್ವಾರಂಟೈನ್ ಮಾಡಿಸಲು ಏನು ಸಮಸ್ಯೆ ? ರೈಲಿನಲ್ಲಿ ಮಾಡಿಸಿದ ವ್ಯವಸ್ಥೆ ಈಗ ಎಲ್ಲಿದೆ ಎಂದು ಖಾದರ್ ಪ್ರಶ್ನಿಸಿದರು.

ಇನ್ನು ವಿದೇಶಗಳಿಂದಲೂ ತವರೂರಿಗೆ ಬರುವವರನ್ನು ಕರೆತರುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಲವಾಗಿದೆ. ಕೇರಳಕ್ಕೆ 28 ವಿಮಾನಗಳು ಬಂದರೆ, ಮಂಗಳೂರಿಗೆ ಬಂದದ್ದು ಕೇವಲ ಎರಡೇ ವಿಮಾನ. ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಸಂೂರ್ಣ ವೈಲ್ಯ ಇದಕ್ಕೆ ಕಾರಣ ಎಂದು ಖಾದರ್ ಆರೋಪಿಸಿದರು.

ಕೇರಳ ಕರ್ನಾಟಕ ಗಡಿಭಾಗ ಬಂದ್ ಕುರಿತಂತೆ ಮಾತನಾಡಿದ ಅವರು, ಮಂಗಳೂರಿನ ಶೇ.20ರಷ್ಟು ಮಂದಿ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಾರೆ. ಕಾಸರಗೋಡಿನವರೂ ಇಲ್ಲಿ ಕೆಲಸ ಮಾಡುತ್ತಾರೆ. ಅದೆಷ್ಟೋ ಮಂದಿಗೆ ಈಗ ಕೆಲಸ ಇಲ್ಲ. ದಿನದ ಪಾಸ್ ಮೂಲಕ ಅವರಿಗೆ ಕೆಲಸಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಮುಖಂಡರಾದ ಈಶ್ವರ್ ಉಳ್ಳಾಲ, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News