ಬಸ್ ಚಾಲಕ, ನಿರ್ವಾಹಕರಿಗೆ ಸುರಕ್ಷತಾ ಕಿಟ್ ನೀಡಲು ಜೆ.ಆರ್.ಲೋಬೊ ಆಗ್ರಹ

Update: 2020-05-30 17:23 GMT

ಮಂಗಳೂರು, ಮೇ 30: ದ.ಕ.ಜಿಲ್ಲೆಯಲ್ಲಿ ಜೂ.1ರಿಂದ ಖಾಸಗಿ ಬಸ್ಸುಗಳ ಓಡಾಟ ಪ್ರಾರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಬಸ್ ಮಾಲಕರ ಸಂಘಟನೆಗಳು ಕೂಡ ಬಸ್‌ಗಳನ್ನು ಓಡಿಸಲು ಆಸಕ್ತಿ ವಹಿಸಿವೆ. ಈ ಸಂದರ್ಭ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಸುರಕ್ಷತಾ ಕಿಟ್ ನೀಡಲು ಜಿಲ್ಲಾಡಳಿತ ಮತ್ತು ಬಸ್ ಮಾಲಕರು ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಬಸ್‌ಗಳ ಸಂಚಾರವು ಸಾಮಾನ್ಯ ಜನರಿಗೆ ಅತೀ ಅಗತ್ಯವಾಗಿದೆ. ಕೂಲಿ ಕಾರ್ಮಿಕರು ದೈನಂದಿನ ಚಟುವಟಿಕೆಗಳಿಗೆ ಬಸ್‌ಗಳನ್ನು ಅವಲಂಬಿಸಿರುತ್ತಾರೆ. ಬಸ್ಸುಗಳನ್ನು ಆರಂಭಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ವಹಿಸಬೇಕಿದೆ. ಜನರು ಕೂಡ ಸುರಕ್ಷಿತ ಅಂತರ ಕಾಪಾಡಲು ಮುಂದಾಗಬೇಕಿದೆ. ಅಲ್ಲದೆ ಬಸ್ ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಬೇಕು. ಎಂದು ಜೆ.ಆರ್.ಲೋಬೋ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News