ಜೂ. 3: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-06-01 16:45 GMT

ಮಂಗಳೂರು, ಜೂ.1: ನಗರದ ವಿವಿಧ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಜೂ.3ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಜೂ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರವರೆಗೆ ನಗರದಲ್ಲಿನ 11 ಕೆವಿ ಬೆಂಗ್ರೆ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ (ಜಂಗಲ್ ಕಟ್ಟಿಂಗ್ ಮತ್ತು ಇತರ ನಿರ್ವಹಣಾ ಕಾಮಗಾರಿ) ಹಮ್ಮಿಕೊಂಡಿರುವುದರಿಂದ ತಣ್ಣೀರುಬಾವಿ, ಕಸಬ ಬೆಂಗ್ರೆ, ತೋಟ ಬೆಂಗ್ರೆ, ಬೊಕ್ಕಪಟ್ಣ ಬೆಂಗ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಅಲ್ಲದೆ, ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ 11 ಕೆವಿ ಮುಲ್ಲಕಾಡು, ಕುಂಜತ್ತಬೈಲ್, ಮರಕಡ, ಸುಂಕದಕಟ್ಟೆ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಮುಲ್ಲಕಾಡು, ಆಕಾಶಭವನ, ಕಾವೂರು ಜಂಕ್ಷನ್, ಶಿವನಗರ, ಜರಿನಗರ, ಅಂಬಿಕಾನಗರ, ಮುರ ನಗರ, ಸೌಹಾರ್ದನಗರ, ಸಿದ್ಧಾರ್ಥನಗರ, ಪಡುಪೆರಾರ, ಕತ್ತಲ್‌ಸಾರ್, ಕರಂಬಾರು, ತಳಕಳ ಏರಿಯ, ಮರಕಡ, ಕೆಂಜಾರ್, ಅಂತೋನಿಕಟ್ಟೆ, ಪೊರ್ಕೋಡಿ, ಕಾವೂರು ಪಂಪ್‌ಹೌಸ್, ತೋಡ್ಲಗುಡ್ಡೆ, ಜ್ಯೋತಿನಗರ, ಬಸವನಗರ, ಕೊರಂಟಾಡಿ, ಮಿಲ್ಲತ್‌ನಗರ, ಕುಂಜತ್ತಬೈಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News